Monday, 25 April 2011

JEEVANA

ಜೀವನ
 ದಿನ ದಿನವೂ ತೆವಳಿ ಸಾಗುತಿದೆ ಜನುಮ
ಕಷ್ಟ ಕೋಟಲೆ ನಿವಾರಿಸೂ ಹನುಮ
ಕೈಯೆತ್ತಿ ನೀ ವರ ನೀಡೋ ಜಂಗಮ
ವಿಶ್ವ ಶಾಂತಿಗೆ ಸಾರ್ಥಕವಾಗಲಿ ಜನುಮ ||

ಪರಿಣತಿ
ಪರರ ಕಂಡು ಬಿರು ನುಡಿಯದಿರು ಗೆಳತಿ
ನಿನ್ನೆ, ಇಂದು ಕಳೆದು ನಾಕೆ ಬರುವುದು ದುರ್ಗತಿ
ನಿನ್ನ ಮನದ ಗರಲು  ನಿನ್ನೋದಲಿಗೆ ಗರತಿ
ಇದ ತಿಳಿದರೆ ಜಗದಲಿ ನೀನೆ ಪರಿಣತಿ ||

ದೈವತ್ವ
ದೇಶ ಸೇವೆಗೆ ಮುದುಪಗಿರಲಿ ಪುರುಷತ್ವ
ದೀನರಲಿ ದೇವರ ನೋಡುವುದೇ ಮನುಷ್ಯತ್ವ
ಎಲ್ಲ ಮುಗಿದ ಮೇಲೆಯೇ ಪರತತ್ವ
ಅದರಿಂದ ಕೊನೆಗೆ ನೀ ಪಡೆಯುವೆ ದೈವತ್ವ ||

ಬೆಳಗು
ಗಾಳಿಯು ಸುಗಂಡವ ಹರಡುವಂತೆ
ಬೆಳಗು ಜಗವನೆಲ್ಲ ಬೆಳಗುವಂತೆ
ಸಕಲ ದುಕ್ಕಕು ಮೂಲ ಆಸೆಯಂತೆ
ಅಸೆ ಬಿಟ್ಟ ಮನುಜ ದೇವನಾಗುವಂತೆ ||






No comments:

Post a Comment